ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ಐದು ಎಸ್ಕಾಂ ಗಳಲ್ಲಿ ಖಾಲಿ ಇರುವ ೧೨೩೪ ಹುದ್ದೆಗಳ ನೇಮಕ ಪೂರ್ಣ - ಪ್ರಕ್ರಿಯೆ ಪಾರದರ್ಶಿಕ - ಯಡಿಯೂರಪ್ಪ

ಬೆಂಗಳೂರು:ಐದು ಎಸ್ಕಾಂ ಗಳಲ್ಲಿ ಖಾಲಿ ಇರುವ ೧೨೩೪ ಹುದ್ದೆಗಳ ನೇಮಕ ಪೂರ್ಣ - ಪ್ರಕ್ರಿಯೆ ಪಾರದರ್ಶಿಕ - ಯಡಿಯೂರಪ್ಪ

Thu, 28 Jan 2010 15:39:00  Office Staff   S.O. News Service
ಬೆಂಗಳೂರು, ಜನವರಿ 28:  5 ಎಸ್ಕಾಂಗಳಲ್ಲಿ ಖಾಲಿ ಇರುವ 1234 ಸಹಾಯಕ ಇಂಜಿನಿಯರ್ ಹಾಗೂ ಕಿರಿಯ ಇಂಜಿನಿಯರ್ ನೇಮಕ ಮಾಡಲಾಗಿದ್ದು, ಈ ನೇಮಕಾತಿ ಪ್ರಕ್ರಿಯೆ  ಪಾರದರ್ಶಕವಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ. 

ಆನ್‌ಲೈನ್ ಮೂಲಕವೇ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು,  ದೇಶದಲ್ಲಿಯೇ ಮೊದಲನೇ ಭಾರಿಗೆ ಇಂದನ ಸಚಿವ ಈಶ್ವರಪ್ಪ ಅವರು ವಿನೂತನ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಅಭಿನಂದಿಸಿದರು. 

ಈ ನೇಮಕ ಪಾರದರ್ಶಕವಾಗಿದ್ದು ಒಂದು ವಾರದ ಒಳಗಾಗಿ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅದೇ ರೀತಿ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯ್ತಿ ಇಲಾಖೆಯಲ್ಲಿ ಪಾರದರ್ಶಕ ಅಡಿ ಪ್ರದೇಶ ಅಭಿವೃದ್ಧಿ ಅಧಿಕಾರ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ೨೫೦೦ ಸಿಬ್ಬಂಧಿಗಳು ಆಯ್ಕೆಯಾಗಿದ್ದಾರೆ ಎಂದರು. 

ಈಶ್ವರಪ್ಪ ರಾಜೀನಾಮೆ: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ತಕ್ಷಣವೇ ಪಕ್ಷದ ಸಿದ್ದಾಂತದಂತೆ ಸಚಿವ ಸ್ಧಾನಕ್ಕೆ ಕೆ.ಎಸ್. ಈಶ್ವರಪ್ಪ ಸ್ವ‌ಇಚ್ಚೆಯಿಂದ ರಾಜೀನಾಮೆ ನೀಡಿದ್ದಾರೆ ಇದನ್ನು ತಾವು ಅಂಗೀಕರಿಸಿದ್ದು, ರಾಜ್ಯಪಾಲರಿಗೆ ಕಳುಹಿಸಿ ಕೊಂಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟದ ಸಭೆಯ ನಂತರ ಪ್ರಕಟಿಸಿದರು. ಇಂದನ ಖಾತೆಯನ್ನು ತಾವೇ ಹೊಂದುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು. 


Share: